Tuesday, December 18, 2018

೩ಕೆ The team of Invincible's!!!

ಅದೊಂದು ಸರ್ಕಾರಿ ಪ್ರಾಥಮಿಕ & ಮಾಧ್ಯಮಿಕ ಶಾಲೆ..

ಗುರುಗಳು ಮಕ್ಕಳಿಗೆ ಒಂದು ಪುಟ್ಟ ಪ್ರಶ್ನೆಯನ್ನಿಟ್ಟಿದ್ದರು 

Team of Invincible's ಅಂದ್ರೆ ಏನು? 

ಎಲ್ಲಾ ಹುಡುಗರು ಮನಸ್ಸಿಗೆ ತೋಚಿದ ಉತ್ತರ ನೀಡಿದರು.. ಸಮಾಧಾನವಾಗಲಿಲ್ಲ ಗುರುಗಳಿಗೆ.. ಏನೋ ಇನ್ನೂ ಹೊಸ ರೀತಿಯ ಉತ್ತರ ಬೇಕಿತ್ತು.. ಮಕ್ಕಳಿಗೆ ಒಂದು ದಿನದ ಸಮಯ ನೀಡಿದರು.. 

ಮಾರನೇ ದಿನ ಹುಡುಗರು ಉತ್ಸುಕರಾಗಿ.. ಶಾಲೆಯ ಕಡೆಗೆ ನುಗ್ಗಿದರು.. ಶಾಲೆಯ ಘಂಟೆ ಬಾರಿಸಿತು.. !

"ಸ್ವಾಮಿ ದೇವನೇ ಲೋಕಪಾಲನೆ ತೇ ನಮಸ್ತೇ ನಮೋಸ್ತುತೆ, ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೆ" ಸುಶ್ರಾವ್ಯವಾಗಿ ಪ್ರಾರ್ಥನೆ ಗೀತೆ ಹಾಡಿದರು.. 

"ಮಕ್ಕಳ.. ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತೇ.. ?"

ಮುಂದಿನ ಬೆಂಚಿನ ಹುಡುಗರು ಜೋರಾಗೆ "ಗುರುಗಳೇ ಸಿಕ್ಕಿತು.." ಎಂದರು.. 

"ಸರಿ ಯಾರು ಹೇಳುತ್ತೀರಾ ಹೇಳಿ" 

"ಗುರುಗಳೇ.. ಒಬ್ಬರು ಹೇಳೊಲ್ಲ.. ಬದಲಿಗೆ ಒಂದು ಪುಟ್ಟ ಸ್ಕಿಟ್ ಮಾಡುತ್ತೇವೆ.. ನೀವೇ ನೋಡಿ ಹೇಳಿ.. "

ಗುರುಗಳಿಗೆ ಅಚ್ಚರಿ.. ಸರಿ ಎಂದು ತಮ್ಮ ಕುರ್ಚಿ ಬಿಟ್ಟ.. "ಒಯೆ ಮರಿ ಆ ಕಡೆ ಜರುಗು. ನಾ ಇಲ್ಲಿಯೇ ಕೂತು ನೋಡುತ್ತೇನೆ" ಅಂತ ಮುಂದಿನ ಬೆಂಚಿನಲ್ಲಿ ಜಾಗ ಮಾಡಿಕೊಂಡು ಕೂತರು.. 

ಸುಮಾರು ಹುಡುಗರು ಜೊತೆ ಒಬ್ಬ ಹುಡುಗಿ ಎದ್ದು ನಿಂತು.. ಮಾಸ್ತರ ಮುಂದೆ ನಿಂತು ತಲೆ ಬಾಗಿ ನಮಿಸಿ. .ಶುರು ಮಾಡಿದರು.. 

"ಕನ್ನಡ ನಾಡು,  ನುಡಿ, ಜಲ ಇವೆಲ್ಲಾ ಒಂದು ಸ್ಫೂರ್ತಿ ನೀಡುವ ಶಕ್ತಿಗಳು.. ನಾವೆಲ್ಲಾ ಇಂದು ಒಂದಾಗಿದ್ದೇವೆ.. ನಮ್ಮ ಮಾತೃಭಾಷೆಗಳು ಬೇರೆ ಬೇರೆ.. ಆದರೆ ನಮ್ಮೆಲ್ಲರ ಮನ ಮಿಡಿಯುವುದು ಕರುನಾಡ ಭಾಷೆ ಕನ್ನಡಕ್ಕಾಗಿ..ಅನೇಕ ಮಹಾಕವಿಗಳು, ಜ್ಞಾನವಂತರು, ಸಂತರು, ಋಷಿಮುನಿಗಳು ನೆಡೆದಾಡಿದ ಈ ನಾಡಿನಲ್ಲಿ ಕನ್ನಡ ಭಾಷೆ ಆಲದ ಮರದ ಹಾಗೆ ಆಳವಾಗಿ ಬೇರೂರಿದೆ.. ಬಿಳುಲುಗಳು ಅಕ್ಕ ಪಕ್ಕ ಹರಡಿಕೊಂಡು ವಿಸ್ತಾರವಾಗುತ್ತಿದೆ.. ಇದು ನನ್ನೊಬ್ಬಳ ಪರಿಶ್ರಮವಲ್ಲ.. ಜೇನುಗೂಡಿನಲ್ಲಿ ಅನೇಕ ನೊಣಗಳು ಹೂವುಗಳ ಮಕರಂದ ಹೀರಿ ಹೀರಿ ಗೂಡು ಕಟ್ಟುವ ಹಾಗೆ ನನ್ನ ಜೊತೆ ಮುಂಬೈಯಿಂದ ಬಂದಿರುವ ಅಶೋಕ್ ಶೆಟ್ಟಿ ಇದ್ದಾರೆ, ಕರಾವಳಿ ಪ್ರದೇಶದಿಂದ ಬಂದ ಮಹೇಶ್ ಮೂರ್ತಿ ಇದ್ದಾರೆ, ಭದ್ರಾವತಿಯಿಂದ ಸತೀಶ್ ನಾಯಕ್ ಇದ್ದಾರೆ, ಬೆಂಗಳೂರಿನಲ್ಲಿ ಇರುವ ಗೋಪಿನಾಥ್, krhalli ಅಂತ ಹೆಸರಿನಲ್ಲಿ ಸೇರಿಸಿಕೊಂಡಿರುವ ನವೀನ್  ಇದ್ದಾರೆ, ಚಿಕ್ಕಬಳ್ಳಾಪುರದಿಂದ ಜೆವಿಎಮ್ ನಾಯ್ಡು ಬಂದಿದ್ದಾರೆ, ಸಂಕೋಚ ಸ್ವಭಾವದ ಪ್ರದೀಪ್ ರಾವ್ ನಮ್ಮ ಜೊತೆ ಇರುತ್ತಾರೆ, ನಮ್ಮದೇ ಸಂಸ್ಕೃತಿ ಎನ್ನುವ ಪ್ರಮೋದ್ ಶ್ರೀನಿವಾಸ,  ಶೃಂಗೇರಿಯಿಂದ ಅರುಣ್, ಸುಂದರ ಮಲೆನಾಡಿನ ಭರತ್ ಆರ್ ಭಟ್, ಹೊಸ ಹೊಸ ಆಲೋಚನೆಯ ನೂತನ್ ಇವೆಲ್ಲರ ಬೃಹತ್ ಪರಿಶ್ರಮದ ಜೊತೆಯಲ್ಲಿ ಅಳಿಲು ಸೇವೆ ಮಾಡುತ್ತಾ ಇರುವ ನನ್ನನ್ನು ರೂಪ ಸತೀಶ್ ಎಂದು ಗುರುತಿಸುತ್ತಾರೆ.. 

ಅನ್ಯ ಭಾಷಿಕರ ಮಧ್ಯೆ ಕನ್ನಡತನವನ್ನು ಉಳಿಸಲು ಹೀಗೆ ಹುಟ್ಟಿಕೊಂಡ ಗುಂಪು.. ೩ಕೆ 

ಅರ್ಥಾತ್ 
ನ್ನಡ 
ವಿತೆ 
ಥನ .. 

ಎಲ್ಲರೂ ಒಂದುಗೂಡುತ್ತೇವೇ, ಚರ್ಚಿಸುತ್ತೇವೆ,  ಒಂದು ಕಾರ್ಯಕ್ರಮಕ್ಕೆ ಸಿದ್ಧವಾಗುತ್ತೇವೆ.. ಅದನ್ನು ಅಷ್ಟೇ ನಾಜೂಕಾಗಿ ಕಾರ್ಯಗತಗೊಳಿಸುತ್ತೇವೆ.. ಇದು ನಮ್ಮ ಭಾಷೆಯನ್ನ ಉಳಿಸುವ ಕಾರ್ಯಕ್ರಮ ಅಂತಲ್ಲ.. ನಮ್ಮ ಭಾಷೆಯನ್ನು ಬೆಳೆಸುವ ಕಾರ್ಯಕ್ರಮ.. ನಮ್ಮ ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ಕಾರ್ಯಕ್ರಮ.. ಸಾಧಕರನ್ನು ಗುರುತಿಸಿ ಅವರಿಗೆ ನಮ್ಮ ಕೈಲಾದ ಮಟ್ಟಿಗೆ ಒಂದು ಪುಟ್ಟ ಸಮಾರಂಭ ಮಾಡಿ ನಲಿಯುತ್ತೇವೆ, ಸಂಭ್ರಮಿಸುತ್ತೇವೆ. ಅವರ ಕಣ್ಣಲ್ಲಿ ಆನಂದ ಭಾಷ್ಪಗಳು ಬಂದಾಗ ನಮ್ಮ ಪರಿಶ್ರಮ ಸಾರ್ಥಕ ಅನ್ನಿಸುತ್ತೆ.. ಭಾವಸಿಂಚನ, ಶತಮಾನಂಭವತಿ, ಹೊಂಗೆಮರದಡಿ ನಮ್ಮ ನಿಮ್ಮ ಕಥೆಗಳು.. ಹೀಗೆ ಮೂರು ಸಂಕಲನಗಳು ಬಂದಿವೆ.. ಕವಿಗೋಷ್ಠಿ ನೆಡೆದಿದೆ, ಜಾನಪದ ಕಲೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಒಂದು ಪುಟ್ಟ ಪ್ರಯತ್ನ ನೆಡೆದಿದೆ.. ಗಂಡುಕಲೆಯೆಂದೇ ಹೆಸರಾಗಿರುವ ಯಕ್ಷಗಾನದ ಒಂದು ತುಣುಕನ್ನು ನಮ್ಮ ಕಾರ್ಯಕ್ರಮದಲ್ಲಿ ಮೂಡಿಸಿದ್ದೇವೆ.. ಪುಸ್ತಕ ಬಿಡುಗಡೆ ನೆಡೆಸಿದ್ದೇವೆ.. ಹೀಗೆ ನಮ್ಮ ಕೈಲಾದಷ್ಟು ಮಟ್ಟಿಗೆ ತಾಯಿ ಭುವನೇಶ್ವರಿಗೆ ನಮ್ಮ ಪೂಜೆ ಸಾಗಿದೆ.. "  

ಇಷ್ಟು ಹೇಳಿ ಒಂದು ಲೋಟ ನೀರನ್ನು ಕುಡಿದು.. ಗುರುಗಳೇ ಹೇಗಿದೆ.. ಇಂಥ ತಂಡವನ್ನು ಸೋಲಿಲ್ಲದ ತಂಡ ಅರ್ಥ ಸೋಲಿಸಲಾಗದ ತಂಡ ಅಲಿಯಾಸ್ Team of Invincible's ಅಂತಾರೆ.. ಹೇಗಿದೆ ಗುರುಗಳೇ.. ಇದು ನಿಮ್ಮ ಪ್ರಶ್ನೆಗೆ ಉತ್ತರವಾಗಿರಬಹುದಾ?"

ಗುರುಗಳು.. ಕಣ್ಣುಗಳಿಂದ ಜಾರುತ್ತಿರುವ ಆನಂದಭಾಷ್ಪವನ್ನು ಕರವಸ್ತ್ರದಿಂದ ಒರೆಸಿಕೊಂಡು.. ಕನ್ನಡ ಸರಿಮಾಡಿಕೊಂಡು.. ಹಾರುತ್ತಿದ್ದ ಕೂದಲನ್ನು ಒಮ್ಮೆ ಬೆರಳುಗಳಿಂದ ಒಪ್ಪಮಾಡಿ. ಏನೋ ಹೇಳಲು ಪ್ರಯತ್ನ ಪಡುತ್ತಾರೆ ಆದರೆ ಆಗೋದಿಲ್ಲ.. ಖುಷಿಯಿಂದ ಗಂಟಲು ಕಟ್ಟಿಬಂದದ್ದರಿಂದ ಏನೂ ಹೇಳಲು ಆಗದೆ.. ತಮ್ಮ ಹೆಬ್ಬೆರಳನ್ನು ಮೇಲಕ್ಕೆ ಮಾಡುತ್ತಾರೆ!!!
ಗುರುಗಳ ಪ್ರಶಂಸೆ ಸಿಕ್ಕಿತು.. ಅಂಕಗಳು ೧೦೦/೧೦೦

ಸ್ವಲ್ಪ ಹೊತ್ತು ಮೌನ.. ಗುರುಗಳು ಎದ್ದು ನಿಂತು.. ಜೋರಾಗಿ ಚಪ್ಪಾಳೆ ಹೊಡೆಯುತ್ತಾರೆ.. ಆ ಸದ್ದಿಗೆ ಮಕ್ಕಳೆಲ್ಲರೂ ಜೋರಾದ ಕರತಾಡನ ಮಾಡುತ್ತಾರೆ.. ಅಕ್ಕ ಪಕ್ಕದ ತರಗತಿಯವರೆಲ್ಲರೂ ಇದೇನಾಯಿತು ಎಂದು ಬಂದು ನೋಡಿದಾಗ.. ಅಲ್ಲಿ ನೆಡೆದ ಘಟನೆಯನ್ನು ಗುರುಗಳು ವಿವರಿಸುತ್ತಾರೆ.. ಸೂರೆ ಕಿತ್ತುಹೋಗುವಂತೆ ಚಪ್ಪಾಳೆ ಸದ್ದು.. 

"ಗುರುಗಳು ಅದೆಲ್ಲ ಸರಿ ಮಕ್ಕಳ.. ಈ ತಂಡದ ಬಗ್ಗೆ ನಿಮಗೆ ತಿಳಿದ ಬಗೆ ಹೇಳಿ..!" 

"ಗುರುಗಳೇ.. ನಮ್ಮ ಮನೆಯಲ್ಲಿ ದಿನಪತ್ರಿಕೆಯಲ್ಲಿ ಈ ತಂಡದ ಬಗ್ಗೆ ವಿವರ ಬಂದಿತ್ತು.. ಆದರೆ ಆ ಸುದ್ದಿಯನ್ನು ಕತ್ತರಿಸಿ ಇಟ್ಟಿದ್ದೆ. .ಎಲ್ಲೊ ಕಳೆದು ಹೋಗಿದೆ.. ಆದರೆ ಅದರ ಕೆಲವು ಚಿತ್ರಗಳನ್ನು ಕತ್ತರಿಸಿ ಇಟ್ಟಿದ್ದೆ.. ಅದು ಸಿಕ್ಕಿತು.. ಇಗೋ ಇಲ್ಲಿ ನೋಡಿ"

ತಂಡದ ಗುರುತಿನ ಬಿಲ್ಲೆ 
  
ತಂಡದ ಸದಸ್ಯರು 

ತಂಡದ ಸದಸ್ಯರು.. !!!

ಅಲ್ಲಿದ್ದವರಿಗೆಲ್ಲಾ ಮಾತೆ ಬರುತ್ತಿಲ್ಲ.. ಚಪ್ಪಾಳೆಯ ಸದ್ದೊಂದೇ ಕೇಳಿಸಿದ್ದು. .. 

ಗುರುಗಳು ಹೇಳಿದರು "ನೋಡಿ ಮಕ್ಕಳ.. ೩ಕೆ ತಂಡ ನಿಮಗೆ ಮಾದರಿ.. ನಾವು ಎಲ್ಲಿಂದ ಬಂದಿದ್ದೀವಿ. ಹೇಗಿದ್ದೀವಿ ಎನ್ನೋದು ಮುಖ್ಯವಲ್ಲ.. ನಾವು ಯಾವ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತೇವೆ, ಅದನ್ನು ಹೇಗೆ ಮಾಡುತ್ತೇವೆ ಎನ್ನೋದು ಮುಖ್ಯ.. ಈ ತಂಡಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಹಾಗೆಯೇ ಆ ಮಹಾಮಹಿಮನು ಈ ತಂಡಕ್ಕೆ ಇನ್ನೂ ಹೆಸರು, ಯಶಸ್ಸು, ಕೀರ್ತಿ ತಂದುಕೊಡಲಿ ಎಂದು ಹಾರೈಸುತ್ತೇನೆ.. "

ಮುಖ್ಯೋಪಾಧ್ಯಾಯರು ಎಲ್ಲರನ್ನುಉದ್ದೇಶಿಸಿ "ನೋಡಿ ನನ್ನ ಸಹೋದ್ಯೋಗಿಗಳೇ, ನನ್ನ ಪ್ರೀತಿಯ ಮಕ್ಕಳೇ. ಉತ್ತಮ ಕಾರ್ಯಕ್ಕೆ ಎಂದೂ ಆ ದೈವದ ಬೆಂಬಲ ಇದ್ದೆ ಇರುತ್ತದೆ.. ಹೊರಳಿ ನೋಡದೆ ಮುಂದಡಿ ಇಟ್ಟಾಗ ಯಶಸ್ಸಿನ ಬೆಳಕು ಸದಾ ನಿಮ್ಮ ಮೇಲಿರುತ್ತದೆ.. ಈ ಸುಂದರ ಸ್ಕಿಟ್ ಮಾಡಿದ ಎಲ್ಲಾ ಮಕ್ಕಳಿಗೂ ಅಭಿನಂದನೆಗಳು.. ಹಾಗೆಯೇ ಈ ಅದ್ಭುತ ವಿವರವನ್ನು ನೀಡಲು ಪ್ರೇರೇಪಿಸಿದ ಈ ನಿಮ್ಮ ಗುರುಗಳಿಗೂ ಅಭಿನಂದನೆಗಳು.. ಎಲ್ಲರಿಗೂ ಶುಭವಾಗಲಿ.. ಪ್ರತಿಕ್ಷಣವೂ ಶುಭತರಲಿ.. "

*****

೩ಕೆ ತಂಡ.. ಈ ಗುಂಪಿನ ಪರಿಚಯವಾದದ್ದು ೨೦೧೨ರಲ್ಲಿ.. ಕವಿತೆ ಕಥನ ಎನ್ನುತ್ತಾ ಉತ್ತಮ ಕಾರ್ಯಮಾಡುತ್ತಿರುವ ಈ ತಂಡದ ಬಗ್ಗೆ ನನ್ನ ಬಾಲಭಾಷೆಯಲ್ಲಿ ಬರೆಯಬೇಕೆಂಬ ಆಸೆಗೆ ಕಾವು ಕೊಟ್ಟಿದ್ದ ಶ್ರೀ ಮಂಜುನಾಥ ಕೊಳ್ಳೇಗಾಲ ಅವರ thumbs up ಚಿತ್ರ.. ಆ ದೈವಿಕ ಪ್ರೇರಣೆ ಹೇಗಾಯಿತೋ ಗೊತ್ತಿಲ್ಲ.. ಆದರೆ ಈ ಬರಹದ ಪೂರ್ತಿ ಶ್ರೇಯಸ್ಸು ಆ ಚಿತ್ರದಲ್ಲಿರುವ ಮಹನೀಯರಿಗೆ ಸಲ್ಲಬೇಕು.. ಜೊತೆಗೆ ಇಂತಹ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ೩ಕೆ ತಂಡದ ರೂವಾರಿ ರೂಪ ಸತೀಶ್ ಅವರಿಗೂ ಮತ್ತು ತಂಡದ ಸದಸ್ಯರಿಗೂ ಸಲ್ಲಬೇಕು ಎನ್ನುವ ಆಶಯ ಹೊತ್ತು ಈ ಲೇಖನ ನಿಮ್ಮ ಮುಂದೆ ಬಂದಿದೆ.. 

ಉತ್ತಮ ಕಾರ್ಯಕ್ಕೆ ಭಗವಂತನ ಅನುಗ್ರಹ ಇದ್ದೆ ಇರುತ್ತದೆ.. ಅದಕ್ಕೆ ಸಾಕ್ಷಿ.. ಈ ಕೆಳಗಿನ ಚಿತ್ರ.. !!!

ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ..
ಈ ನಿನ್ನ ಅನುಗ್ರಹದ ಬೆಳಕು 
ಸದಾ ೩ಕೆ ತಂಡದ ಮೇಲೆ ಇರಲಿ!!!

Sunday, September 23, 2018

Mission impossible from Mission Catalyst team!!!

Catalyst...."hey this word is very familiar to me"...sounded my heart...i went to my school days..yeah catalyst is a substance/things/event which kick start the changes in chemistry/physics or even in human relationships.

When i received a e-mail saying there would be session for three days between 10 to 4, first word came out from my heart was...uff...8 hours a day for three days...omg....!!!

Normally prejudice was/is/will never/not/never be my weakness! But with a heart weighing 50mg more, I stepped in to a hall which was already filled to the brim by enthusiastic students, professionals, consultants and so on.  I chose one corner of the the hall where i can be my own!

But ऊपरवाले की सोच कुछ अलग था! 

"Good morning guys" slightly higher decibel voice greeted us.  The smiling madam in a black and red outfit welcomed us, and the wonderful journey kicked off. 

At the end of the two days, (still a day more to go),  heart was lighter by 100mg, and I was brimming with confidence.  It is not that, whatever message learnt/conveyed was new for us, we didn't made an attempt to shred those extra ounce from our baggage and the moment we did after the days session,  started feeling lighter!. 

Yes, indeed it was.  The session took off effortlessly and just like sunflower turns to the direction of the sun, we just followed smiling madam's words, and each phrase like an arrow hitting the bulls eye, started making way in to the heart. 

"respectable fear"
"fear is fake evidence appearing in real"
"beg, borrow, steel"
"hope i am making sense"
"hope you understood"
"3 years of hardship....30 years of happy life"
"shred the procrastination and you would be the winner" 
"people will always notice the small black dot on a white paper"
"english is just a language to communicate"
"KISS.. keep It Short & Simple"

like the above many phrases, it started pounding on my brain, and from the brain, it started seeping in to the veins of the heart.  

The self introduction style, the small small exercises, correcting the mistakes with a smile on the face, just like mother teaches her kids, it was not a shy feel to correct ourselves. 

The task of drawing elephant by the team, and later explaining what is correct, and what could have been a better way, came really well from the madam. 

The well executed small kits from a situation added zing to the training session. 

I read some where, ಒಂದು ಶಿಲೆಯಲ್ಲಿ ಮೂರ್ತಿ ಮೊದಲೇ ಇರುತ್ತೆ.. ಶಿಲ್ಪಿ ಬೇಡದ ಶಿಲೆಯ ಚೂರನ್ನು ತೆಗೆದು ಮೂರ್ತಿಯನ್ನು ಅನಾವರಣಗೊಳಿಸುತ್ತಾನೆ.. " It was very true.  As madam said, it is not that, we don't know what is what, and what is right. It is just we never or rather we didn't tried to resurrect ourselves.  Madam put a wonderful effort to remove the "cobwebs" my from heart. Thank you madam! 

This blog is dedicated to energetic Ms. Kirthi for her nonstop pep talk and wonderful information provided in a very simple manner with radiating smile all the time.   

The effort of the supporting staff is highly commendable right from organising the session to spreading all over the session by felicitating with the materials, required breaks and of course helping the audience to participate in the exercises.

I felt after the second day, my soul stood out in front of me and telling "Sri.. just listen to her words, and keep practicing it for 21 days it becomes your Habit, and Habit will bring the world to your hands!!!!

Thank you Ms. Kirthi madam and Ms. Divya madam. I would like to give a separate space for Mr. Kiran for superb pep talk  - "No problems we choose the participants" with a brilliant soothing smile in bringing best in us by helping us in creating a story from few dies and the wonderful group discussion by a team.  


I feel i invested a good 18 hours for a better tomorrow...oh no.. wipe out the procrastination...for a better today, spilling through out the career and life!!!

Kudos Mission Catalyst!!!

Tuesday, October 24, 2017

ಸಿಬಿ.. ಸಿಬಿ"eye".. ನಮ್ಮ ಗೆಳೆತನದ ಅದ್ಭುತ ಕಣ್ಣು ನಿವೇದಿತಾ ಚಿರಂತನ್

 CB...ಹೆಸರು ಹೇಗೆ  ಹುಟ್ಟಿತು ನನಗೂ ಗೊತ್ತಿಲ್ಲ.. ಸಾಮಾನ್ಯ  ನನಗೆ ಹತ್ತಿರವಾದವರು ಅಥವಾ ನಾನು ಹತ್ತಿರವಾದವರಿಗೆ ಪ್ರೀತಿಯಿಂದ ಅಡ್ಡ ಹೆಸರು ಇಡುವುದು ನನಗೆ ಹೈ ಸ್ಕೂಲ್ ಮಾಸ್ಟರ್ ಇಂದ ಸಿಕ್ಕ ಬಳುವಳಿ ..

ನಿವೇದಿತಾ ಹೆಸರು ನಿವಿ ಆಗಿತ್ತು.. ಆದರೂ  ಸಮಾಧಾನವಿರಲಿಲ್ಲ.. ನಾ ಹೆಸರಿಡುವ ಹೆಸರು ವಿಭಿನ್ನವಾಗಿರುತ್ತಿತ್ತು ಮತ್ತು ವಿಚಿತ್ರವಾಗಿರುತ್ತಿತ್ತು..

ಸಿಬಿ ಗೂ ನನಗೂ ಬಹಳ ಸಲ ಇದರ ಬಗ್ಗೆ ಮಾತಾಗಿತ್ತು.. ಶ್ರೀ ನನಗೆ ಯಾಕೆ ನಿಕ್ ನೇಮ್  ಕೊಟ್ಟಿಲ್ಲ.. ನಾನು ಸುಮ್ಮನೆ ನಕ್ಕು ಮಾತನ್ನು ಬದಲಿಸಿದ್ದೆ ಹಲವಾರು ಬಾರಿ..

ಅಂತೂ ಒಂದು ದಿನ ಆ ಮಹೂರ್ತ ಬಂದೆ ಬಿಟ್ಟಿತು.. ಹೆಸರು ಸಿಕ್ಕೇ ಬಿಟ್ಟಿತು ನಿವೇದಿತಾ ಸಿಬಿ ಆಗಿಬಿಟ್ಟರು.. !!!

ಒಂದು ಬ್ಲಾಗ್ ಬರಹಕ್ಕೆ ನಾ ಹಾಕಿದ ಕಾಮೆಂಟ್.. ಮತ್ತು ಫೇಸ್ಬುಕ್ ನಲ್ಲಿ ನಾ ಚಾಚಿದ ಸ್ನೇಹ ಹಸ್ತಕ್ಕೆ ಅವರ ಮೊದಲ ಪ್ರಶ್ನೆ..ನನ್ನ ಬ್ಲಾಗ್ ನಲ್ಲಿ ಕಾಮೆಂಟ್ ಮಾಡುವ ಶ್ರೀಕಾಂತ್ ಮಂಜುನಾಥ್ ನೀವೇನಾ., ಇಲ್ಲಿಂದ ಶುರುವಾಯಿತು ನಮ್ಮ ಗೆಳೆತನ.. ಹರಿಯುವ ನದಿ ಒಂದು ಪುಟ್ಟ ಝರಿಯಿಂದ ಶುರುವಾಗಿ ನದಿಯಾಗಿ ಕಡಲನ್ನು ಸೇರುವ ಹಾಗೆ.. ನಮ್ಮ ಗೆಳೆತನ ಒಂದು ಚಿಕ್ಕ ಹಾಯ್ ಇಂದು ಶುರುವಾಗಿದ್ದು ಇಂದು ಮಾತಾಡುತ್ತಲೇ ಇರುವ ಮಟ್ಟಕ್ಕೆ ತಂದು ನಿಂತಿದೆ..

ಸಿಬಿ ೭೦ ಸೆಕೆಂಡ್ಸ್ ಬೇಕು.. ಸಿಗುತ್ತಾ ಅಂತ ಕೇಳಿ.. ೭೦೦ ಸೆಕೆಂಡ್ಸ್ ಮಾತಾಡಿದ್ದು ಇದೆ..  ಮ್ಯಾರಥಾನ್ .... ಬರೋಬ್ಬರಿ ಹತ್ತು ಘಂಟೆಗಳ ಕಾಲ ಚಾಟ್ ಮಾಡಿದ್ದೇವೆ ಎಸ್ ಎಂ ಎಸ್ ಮೂಲಕ..

ಈ ರೀತಿಯ ಗೆಳೆತನಕ್ಕೆ ಏನೂ ಹೆಸರು ಕೊಡಬಹುದು..ಗೆಳತೀ, ಅಕ್ಕ, ತಂಗಿ.. ಊಹುಂ ಏನೂ ಅಲ್ಲ ಶುದ್ಧ ಗೆಳೆತನ.. ಪರಿಶುದ್ಧ ಗೆಳೆತನ.. ನನಗೆ  ಗೊಂದಲವಿದೆ ಅನಿಸಿದಾಗ  ಸಿಬಿ ೪೩೫ ಸೆಕೆಂಡ್ಸ್.. ಅಂತ ಒಂದು ಮೆಸೇಜ್ ಕಳಿಸಿದರೆ ಸಾಕು.. ತಕ್ಷಣ ಹಾಜರ್..

 ಇವಿಷ್ಟು ಪೀಠಿಕೆಯಾಯಿತು.. ಅಲ್ಲವೇ.. ಈಗ ನೋಡಿ ಒಂದು ಮಜಾ.. !!!

ಹೀಗೆ ಒಮ್ಮೆ ಸಮುದ್ರದ ದಡದಲ್ಲಿ ಓಡಾಡುತ್ತಿದ್ದೆ .. .ಐಸ್ ಕ್ರೀಮ್.. ಚಾಟ್ಸ್.. ಸೌತೆಕಾಯಿ, ಕಲ್ಲಂಗಡಿ.. ಅನಾನಾಸ್.. ಗೋಲಿ ಸೋಡಾ.. ಎಲ್ಲವೂ ಸಮುದ್ರ ತೀರ ವಿಹಾರಾರ್ಥಿಗಳ ಹೊಟ್ಟೆಯ ಯೋಗಕ್ಷೇಮ ನೋಡಿಕೊಳ್ಳುತ್ತಿತ್ತು..

ಸಮುದ್ರದ ಅಲೆಗಳ ಜೊತೆಯಲ್ಲಿ ಯಾರೋ ಮಾತಾಡುತ್ತಿದ್ದ ದೃಶ್ಯ ಕಂಡಿತು.., ಇದ್ಯಾರಪ್ಪಾ ಅಲೆಗಳ ಜೊತೆಯಲ್ಲಿ ಮಾತಾಡುತ್ತಿರುವವರು ಎಂದು ಆ ವ್ಯಕ್ತಿಯ ಹತ್ತಿರಕ್ಕೆ ಹೋಗುತ್ತಿದ್ದೆ.. ಅಷ್ಟರಲ್ಲಿ  ಕಾಲಿನ ಕೆಳಗೆ ಮರಳಿನ ರಾಶಿಯನ್ನು ಸುಯ್ ಎಂದು ಎಳೆದುಕೊಂಡು ಒಂದಷ್ಟು ಅಲೆಗಳು ಹೋದವು.. ಕಾಲಿನಡಿ ಮರಳುಕುಸಿದಿದ್ದರಿಂದ .. ನಾ ಅಲ್ಲಿಯೇ ತಪಕ್ ಅಂತ ಕುಸಿದು ಬಿದ್ದೆ..

ಒಂದು ಅಲೆ ಮತ್ತೆ ನನ್ನ ಹತ್ತಿರ ಬಂದಿತು.. ನೋಡು ಶ್ರೀ..  ನಾ ಒಂದು ಚುಟುಕು ಸಾಲುಗಳನ್ನು ಬರೆದಿದ್ದೇನೆ.. .. ಅದನ್ನ ಓದಿ ಹೇಳು ಹೇಗಿದೆ ಎಂದು..

ಅಲೆ ಮಹಾರಾಜನೇ.. ನೀ ಬರೆದಿದ್ದನ್ನ ನಾ ಓದಿ ವಿಮರ್ಶೆ ಮಾಡೋದೇ..

ತಕ್ಷಣ ಅಲೆ ಮೇಲಕ್ಕೆ ಎದ್ದು "ನೋಡು ಶ್ರೀ ಆನೆಯನ್ನು ಮುಟ್ಟಿ ನೋಡಿ ಅನುಭವ ಪಡೆದ ಹಾಗೆ ಒಬ್ಬೊಬ್ಬರ ಅನುಭವ ಒಂದೊಂದು ರೀತಿ.. ವಿಶೇಷ.. ವಿಭಿನ್ನ.. .. ಅದನ್ನ ವಿಶ್ಲೇಷಿಸೋಕೆ ಹೋಗಬಾರದು..ಆನೆ ನೆಡೆದದ್ದೇ ದಾರಿ.. ಈಗ ಅದೆಲ್ಲ ಕಥೆ ಬೇಡ.. ಇದನ್ನು ಓದಿ ಹೇಳು ಹೇಗಿದೆ ಎಂದು..

ಸರಿ  ಕಣಪ್ಪ.. ದೇವರು ಕೊಟ್ಟ ಸ್ನೇಹಿತ ನೀನು.. ನೀ ಹೇಳಿದ ಮೇಲೆ ಇಲ್ಲ ಅನ್ನೋಕೆ ಮಾತೆ ಬರೋಲ್ಲ.. ಕೊಡು ಓದುವೆ..

ಸುಂದರವಾದ ಚೌಕಟ್ಟಿನಲ್ಲಿ ಹಾಕಿದ ಪತ್ರಿಕೆ.. ಮುದ್ದಾದ ಅಕ್ಷರಗಳು ಮುತ್ತಿನ ಮಣಿಯ ಹಾಗೆ ಜೋಡಿಸಿದ ಹಾಗಿತ್ತು.. ಮೆಲ್ಲಗೆ ಕಣ್ಣರಳಿಸುತ್ತ ಓದಲು ಶುರುಮಾಡಿದೆ ..

​ಇದೊಂದು ದೊಡ್ಡ ಜಗತ್ತು, ಜಗತ್ತೆಂದರೆ ದೊಡ್ಡದೇ ಅಲ್ಲವೇ!! 

ಇಷ್ಟು ದೊಡ್ಡ ಜಗತ್ತಿನಲ್ಲಿ ನಮ್ಮ ಜೀವನ ಅಥವಾ ನಾವು ಅನ್ನೋದು ತೃಣಕ್ಕಿಂತಲೂ ಚಿಕ್ಕದು. 
ಆದರೂ ನಮ್ಮನ್ನು ಸೃಷ್ಟಿಸಿದ ಭಗವಂತ, "ನೋಡು ಮಗು, ನೀನು ಮಾತ್ರ ಎಲ್ಲಿಯೂ ನಿಲ್ಲಬಾರದು. 
ನಾ ನಿಲ್ಲಿಸು ಎಂದು ಹೇಳುವವರೆಗೂ ನಡೆಯುತ್ತಲೇ ಇರಬೇಕು"  ಎನ್ನುವ ನಿಯಮವನ್ನು ಮಾಡಿದ್ದಾನೆ. 
"ದಣಿವಾದರೆ ಮಾತ್ರ ಒಂದು ಮರದ ನೆರಳಿನಡಿ ಕುಳಿತು ವಿಶ್ರಾಂತಿ ಪಡೆಯಬಹುದು ಅಷ್ಟೇ.  
ಅರೆ ಘಳಿಗೆ ವಿಶ್ರಾಂತಿ ಪಡೆದು ನಿನ್ನ ಪಯಣ ಮತ್ತೆ ಮುಂದುವರೆಸಬೇಕು." ಎಂದು ಸ್ಪಷ್ಟ ಪಡಿಸಿದ್ದಾನೆ.  

ಆ ಅರೆ ಘಳಿಗೆಯ ವಿಶ್ರಾಂತಿ ನಮ್ಮನ್ನು ಮತ್ತೆ ಜೀವನದ ನಡೆ ಮುಂದುವರೆಸುವುದಕ್ಕೆ ಹುರಿದುಂಬಿಸುತ್ತದೆ.

 ಆ ಮರದ ಕೆಳಗೆ ಕುಳಿತಾಗ ಬೀಸುವ ತಣ್ಣನೆಯ ಗಾಳಿಯ ಹಾಗೆ, 
ಸವೆದು ಸುಸ್ತಾಗಿ ತರಚಿ-ಪರಚಿ ಗಾಯವಾಗಿದ್ದರೆ ವಾಸಿ ಮಾಡುವ ಮುಲಾಮಿನ ಹಾಗೆ. 
"ದೂರದೂರಿನಲ್ಲಿ ಒಂದು ಸುಂದರ ತಾಣವಿದೆ.  
ಅಲ್ಲಿ ಬಣ್ಣ ಬಣ್ಣದ ಕನಸ ಕಾಣಬಲ್ಲ, ಆ ಕನಸುಗಳನ್ನ ನನಸು ಮಾಡಬಲ್ಲ ಮಾಯಾ ನಗರಿ ಇದೆ", 
ಎಂದು ಕತೆ  ಹೇಳುತ್ತ ತನಗೇ ಅರಿವಿಲ್ಲದೆ ಆ ಪಯಣಿಗನಿಗೆ ಪ್ರೇರೇಪಿಸುವ ಸ್ಪೂರ್ತಿಯ ಚಿಲುಮೆಯ ಹಾಗೆ ಈ ಹುಡುಗಿ. 

ಅವರದೇ ರೀತಿಯಲ್ಲಿ ಹೇಳಬೇಕೆಂದರೆ: 


Their is this magic that binds her to 

every other person she meets. 

Creative and skillful art she carries. 


Witty one liners and the Colors she plays with. 

Problem solving techniques she possess 

Radiant and bright smile she endorses 

Frankness unlimited & cuteness overloaded. 

Kabhi Shayraana yaa phir kabhi kabhi 

Camere ki ankhon se nazme churaana. 

The list can go on n on to make it envious.


Shez choosy, shez crazy, and she iz 


none other than the "Niveous".


ನೀವ್ಸ್ ನಿಮ್ಮ ಈ Cheerful attitude ನೂರ್ಕಾಲ  ಹೀಗೆ ಇರಲಿ ಎಂದು ಆಶಿಸುತ್ತಾ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ನಿಮಗೆ ಅಪ್ಪುಗೆ 


ಓದುತ್ತಾ ಹೋದ ಹಾಗೆ ಅಲೆ ಅಲೆ ನಿಲ್ಲುತ್ತಾ ಹೋಯಿತು. ಸುಂದರ "ರೂಪ" ತಾಳಿತು.. ನನ್ನ ಕಣ್ಣುಗಳಲ್ಲಿ ಆನಂದದ ಆಣೆಕಟ್ಟು ನೀರಾಗಿ ಹರಿಯಲು ಶುರುಮಾಡಿತ್ತು ..

ಅರೆ DFR ನೀವೇ ಅಲೆಯಾಗಿ ಬಂದಿದ್ದೀರಾ .. ನಮ್ಮ ಸೊಗಸಾದ ಗೆಳತಿಗೆ ಅದ್ಭುತವಾಗಿ ಬರೆದಿದ್ದೀರ.. ನೀವು ಬರೆದ ಪ್ರತಿ ಸಾಲು ಸತ್ಯ ಸತ್ಯ ಸತ್ಯ...

"೧೯೦ ಸೆಕೆಂಡ್ಸ್ ಇದೆಯಾ DFR"

"ಖಂಡಿತಾ ಶ್ರೀ"

ಇಬ್ಬರೂ ಮೆಲ್ಲನೇ ಮರಳ ರಾಶಿ.. ಅಲೆಗಳ ರಾಶಿ ತುಂಬಿದ್ದ ಸ್ನೇಹದ ಕಡಲಿನತ್ತ ಹೆಜ್ಜೆ ಹಾಕಲು ಶುರುಮಾಡಿದೆವು..

"ಇಲ್ಲ ನೀ ನನ್ನ ಪ್ರಶ್ನೆಗಳಿಗೆ  ಉತ್ತರ ಕೊಡುವ ಕೊಡುವ ತನಕ ತನಕ ನಾ ನಾ ಇಲ್ಲಿಂದ ಇಲ್ಲಿಂದ ಹೋಗುವುದಿಲ್ಲ ಹೋಗುವುದಿಲ್ಲ.. ನೀ ಉತ್ತರ ಉತ್ತರ ಕೊಡ ಕೊಡ ಕೊಡಲೇಬೇಕು.. "

ಜೋರಾದ ಮಾತುಗಳು ಅಲೆಗಳ ಅಬ್ಬರವನ್ನು ಮೀರಿಸುತ್ತಿದ್ದವು.. ಕಡೆಯಲ್ಲಿ ಸೋತಿದ್ದು ಯಾರು ಅಂದಿರಾ.. ಇನ್ಯಾರು ಅಲೆಗಳೇ.. :-)

"ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ..
ನೀ ಇಲ್ಲಿ ಬಂದಿರೋದು ಪ್ರಶ್ನೆಗಳ ಕೇಳುವ ಸಲುವಾಗಿ
ಸ್ನೇಹದ ಲೋಕವಿದು..
ಸೋಲ್ ಮೇಟ್ ಗಳ ತಾಣವಿದು.. ನಿನಗೆ ಕೊಟ್ಟಿರುವ ಸ್ನೇಹದ ಪರಿಧಿ ನಿನ್ನ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ.. "

ನೋಡಲ್ಲಿ.. ಒಮ್ಮೆ ತಿರುಗಿ ನೋಡು...

ಅಲೆಗಳ ಜೊತೆಯಲ್ಲಿ ಮಾತಾಡುತಿದ್ದ ಹುಡುಗಿ ರವ್ವನೆ ತಿರುಗಿತು..

"ಅರೆ ರೂಪಕ್ಕ ನೀವು ಇಲ್ಲಿ" (ಪೂರಾ excitement) ..ಜೋರಾಗಿ ಒಂದು ಅಪ್ಪುಗೆ ಕೊಟ್ಟರು ರೂಪಕ್ಕನಿಗೆ

ನಾ ಅಲ್ಲಿಯೇ ಹಲ್ಲು ಬಿಡುತ್ತಾ ನಿಂತಿದ್ದೆ.. "ನನಗೆ ಗೊತ್ತು ಶ್ರೀ ಇದೆಲ್ಲ ನಿಮ್ಮದೇ ಕಿತಾಪತಿ.. ಹಾಯ್" ಎಂದು ತಮ್ಮ ಮಿಲಿಯನ್ ವಾಟ್ ಸ್ಮೈಲ್ ಕೊಡುತ್ತಾ ನನಗೆ ಹಸ್ತ ಲಾಘವ ಕೊಟ್ಟರು..

"ಅದೇನಿದು.. ಇಬ್ಬರೂ ಇಲ್ಲಿ.. ಏನೂ ಸಮಾಚಾರ.." ಮಗುವಿನ ಕುತೂಹಲ ಸಿಬಿ ಮೊಗದಲ್ಲಿ ಕಾಣುತ್ತಿತ್ತು...

ಒಂದು ನಿಮಿಷ ನಿವ್ಸ್ ಅಂದರು DFR
೯೦೦ ಕ್ಷಣಗಳು ಅಂದೇ ನಾನು

ಸರಿ..ಈ ಶ್ರೀಗೆ ಸೆಕೆಂಡ್ಸ್ ಭೂತ ಇನ್ನೂ ಬಿಟ್ಟಿಲ್ಲ.. ಸರಿ ಕಾಯೋಣ... ಅಂತ ಕೈಗೆ ಕಟ್ಟಿದ್ದ ಪುಟ್ಟ ರಿಸ್ಟ್ ವಾಚನ್ನು ನೋಡುತ್ತಾ ಕುಳಿತಿದ್ದರು..

ಶ್ರೀ ಮತ್ತು DFR ಹಾಗೆ ಸ್ವಲ್ಪ ದೂರ ಮಾತಾಡುತ್ತಾ ಹೋಗಿ.. ಓಡುತ್ತಾ ಓಡುತ್ತಾ ಬಂದು..

ಹ್ಯಾಪಿ ಬರ್ತ್ಡೇ ನಿವ್ಸ್ ಅಂತ DFR ವಿಶ್ ಮಾಡಿದರೆ..
ಹ್ಯಾಪಿ ಬರ್ತ್ಡೇ ಸಿಬಿ ಅಂತ ಶ್ರೀ ವಿಶ್ ಮಾಡಿದರು..

"ಸ್ನೇಹದ  ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ" ಐಸ್ ಕ್ರೀಮ್ ಗಾಡಿಯಲ್ಲಿನ ರೇಡಿಯೋ ಕಿರುಚುತ್ತಿತ್ತು..

ನಿವೇದಿತಾ ಅಲಿಯಾಸ್ ನೀವ್ ಅಲಿಯಾಸ್ ಸಿಬಿ.. ನಿಮಗೆ ಈ ಸೋಲ್ ಫ್ರೆಂಡ್ಸ್ ಕಡೆಯಿಂದ ಜನುಮದಿನದ ಶುಭಾಶಯಗಳು..

ತಕ್ಷಣ ಜೋರಾದ ಚಪ್ಪಾಳೆ ಕೇಳಿಸಿತು..ತಿರುಗಿ ನೋಡಿದರೆ.. ಅರ್ಪಿತಾ..

ಅರೆ ವಾಹ್.. ತಾನೇ ಸೃಷ್ಟಿಸಿದ ಪಾತ್ರ .. ತನ್ನ ಒಡತಿಗೆ ಶುಭಾಷಯ ಹೇಳಲು ಬಂದಿದ್ದಾಳೆ..

ಸಿಬಿ ಇದಕ್ಕಿಂತ  ಇನ್ನೇನು ಬೇಕು.. ನಿಮ್ಮ ಸ್ನೇಹದ ಝರಿಯಲ್ಲಿ ನಾವು ಸೇರಿಕೊಂಡಿರುವುದು ನಮ್ಮ ಭಾಗ್ಯ.. DFR.. ಸಿಬಿ .. ಇವರ ಜೊತೆಯಲ್ಲಿ ಅರ್ಪಿತಾ.. ..
ತ್ರಿವೇಣಿ ಸಂಗಮ 

ಶುಭಾಶಯಗಳನ್ನು ಅರ್ಪಿಸುವುದಷ್ಟೇ ನಮ್ಮ ಕೆಲಸ ಎಂದವು ಅಲೆಗಳು..

ಸಿಬಿ ಮತ್ತೊಮ್ಮೆ ಜನುಮದಿನದ ಶುಭಾಶಯಗಳು

(ರಂಗಾದ ಅಕ್ಷರಗಳಲ್ಲಿ ಬರೆದಿರುವ ಲೇಖನ ರೂಪ ಸತೀಶ್ ಅವರದ್ದು .... ಇಬ್ಬರು ಬೇರೆ ಬೇರೆ ರೀತಿಯಲ್ಲಿ ಬರೆದ ಲೇಖನವನ್ನು ಸ್ನೇಹದ ದಾರದಿಂದ.. ಗೆಳೆತನ ಎನ್ನುವ ಸೂಜಿಯಿಂದ ಹೊಲೆದು ಗೆಳೆತನಕ್ಕೆ ಒಂದು ವಸ್ತ್ರ ವಿನ್ಯಾಸಮಾಡುವ  ದುಸ್ಸಾಹಸಕ್ಕೆ ಕೈ ಹಾಕಿದ್ದೇನೆ.. ಒಪ್ಪಿಸಿಕೊಳ್ಳಿ)

Tuesday, May 26, 2015

ಅಕ್ಕಯ್ಯ ಮತ್ತೊಮ್ಮೆ ಜನುಮದಿನದ ಶುಭಾಶಯಗಳು!!!

ವಿದ್ಯೆ ಬುದ್ದಿ ಇಲ್ಲದ ಕುರಿ ಕಾದುಕೊಂಡು ಜೀವನ ಮಾಡುತ್ತಿದ್ದ ಕುರುಬರ ಪಿಳ್ಳೆ.. ಆ ರಾಜ್ಯದ ಮಂತ್ರಿಯ ಕುತಂತ್ರದಿಂದ ರಾಜಕುಮಾರಿಗೆ ಪತಿಯಾಗುತ್ತಾನೆ.. ನಿಜವನ್ನು ಅರಿತ ರಾಜಕುಮಾರಿ.. ಕಾಳಿ ಮಂದಿರಕ್ಕೆ ಕರೆತಂದು ಕಾಳಿಯನ್ನು ಪ್ರಾರ್ಥಿಸುವಂತೆ ಹೇಳಿ ವಿದ್ಯೆ ಬುದ್ದಿ  ಕೇಳಿ ಎಂದು ಹೇಳುತ್ತಾಳೆ.. 

ಕಾಳಿ ಮಾತೆ ಸಂಚಾರಕ್ಕೆ ಹೋದವಳು ದೇವಾಲಯಕ್ಕೆ ಬರುತ್ತಾಳೆ... ಇವನು ಬಾಗಿಲನ್ನು ತೆರೆಯುವುದೇ ಇಲ್ಲ ... 
ಎಷ್ಟು ಕೇಳಿದರೂ ಬಾಗಿಲನ್ನು ತೆರೆಯುವುದಿಲ್ಲ.. ವಾಗ್ಧಾನ ನೀಡುತ್ತಾಳೆ.. ನೀ ಕೇಳಿದ್ದನ್ನು ಕೊಡುವೆ ಎಂದು 
ಇದು ನಿಮಗೆಲ್ಲರಿಗೂ ತಿಳಿದವಿಷಯ ..  ಮುಂದಿದೆ ನೋಡಿ ಅದರ ಮುಂದುವರಿಕೆ.. 

ಬಾಗಿಲನ್ನು ತೆರೆದು.. ಕಾಳಿ ಮಾತೆಯನ್ನು ನೋಡುತ್ತಾನೆ.. ನೋಡಿದರೆ ಅಲ್ಲಿ ಕಾಳಿ ಮಾತೆಗೆ ಬದಲಾಗಿ ಪ್ರತಿ ಮಾತೆ ನಿಂತಿದ್ದಾರೆ.. ನಡುಗುತ್ತಾ ಬರುವ ಕುರುಬರ ಪಿಳ್ಳೆಯ ಬದಲಾಗಿ ಶ್ರೀಕಾಂತ ನಿಂತಿದ್ದಾನೆ.. ನಡುಗುತ್ತಾ ನಡುಗುತ್ತಾ "ಅಕ್ಕಯ್ಯ ಇದೇನು ನಿಮ್ಮ ಉಗ್ರವತಾರ ಈ ನಿಮ್ಮ ಅಣ್ಣನ ಮೇಲೆ.. ಯಾಕೆ ಈ ಆಗ್ರಹ.. ದಯಮಾಡಿ ಶಾಂತವಾಗಿ.. ನಿಮ್ಮ ದಯೆ ಈ ಪಾಮರನ ಮೇಲೆ ಇರಲಿ.. ಯಾಕೆ ಈ ಕೋಪ ಹೇಳಿ ಹೇಳಿ"

"ಅಣ್ಣಾ ನಮ್ಮ ಬಳಗದಲ್ಲಿ ಪ್ರತಿಯೊಬ್ಬರ ವಿಶೇಷ ದಿನಗಳಲ್ಲಿ ನೀವು ಬರೆಯುತ್ತಿದ್ದ ಲೇಖನಗಳನ್ನು ಓದಲು ಕಾಯುತ್ತಿದ್ದೆವು.. ಆದರೆ ಈ ನಡುವೆ ನಿಮಗೆ ಫೇಸ್ ಬುಕ್, ಬ್ಲಾಗ್, ಅದು ಇದು ಗುಂಪಿನ ಸ್ನೇಹಿತರು ಹೆಚ್ಚಾಗಿ ನಿಮಗೆ ಕೊಬ್ಬು ಜಾಸ್ತಿಯಾಗಿದೆ.. ಜೊತೆಯಲ್ಲಿ ಬಂದ ನಮ್ಮನ್ನೆಲ್ಲಾ ಮರೆತಿದ್ದೀರಿ.. ನಿಮಗೆ ನಾವೆಲ್ಲಾ ಬೇಡವಾಗಿದ್ದೇವೆ.. ಅದಕ್ಕೆ ನಿಮ್ಮ ಮೇಲೆ ಕೋಪ.. "

"ಅಕ್ಕಯ್ಯ.. ಇಲ್ಲಾ ಅಕ್ಕ ನಿಮ್ಮನ್ನೆಲ್ಲ ನಾ ಮರೆಯುವುದೇ.. ಅದನ್ನು ಮರೆತರೆ ಕೀ ಬೋರ್ಡ್ ನಲ್ಲಿ ಕೀ ಗಳನ್ನೇ ಮರೆತಂತೆ.. ಅದು ನನ್ನಿಂದ ಸಾಧ್ಯವೇ.. ಒಪ್ಪಿಕೊಳ್ಳುವೆ ನನ್ನ ಶೈಲಿಯಲ್ಲಿ ಉದ್ದುದ್ದ ಡಬ್ಬ ಕಥೆಗಳನ್ನು ನಿಮ್ಮೆಲ್ಲರ ವಿಶೇಷ ದಿನಗಳಲ್ಲಿ ಬರೆದಿಲ್ಲ ಆದರೆ.. ಚಿಕ್ಕ ಚೊಕ್ಕ ಮಾತುಗಳನ್ನು ಹೇಳಿದ್ದೇನೆ.. ಬರೆದಿದ್ದೇನೆ... ಇದಕ್ಕೆ ನನ್ನ ಕೆಲಸದ ಒತ್ತಡವು ಕಾರಣ ಮತ್ತು ಕೆಲವೊಮ್ಮೆ ಮನಸ್ಥಿಯೂ ಕಾರಣ"

"ಇಲ್ಲ ಅಣ್ಣ ನಂಬಲು ಸಾಧ್ಯವಿಲ್ಲ.. ಬೇರೆ ಎಲ್ಲರಿಗೂ ನೀವು ಬರೆಯುತ್ತೀರಾ ನಮಗೆ ಮಾತ್ರ ಯಾಕೆ ತಪ್ಪಿದೆ.. ನಿಮಗೆ ನಾವೆಲ್ಲಾ ಬೇಡ ಅನ್ನಿಸಿದೆ ಅದಕ್ಕೆ ಹೀಗೆಲ್ಲ ಮಾಡುತ್ತಿದ್ದೀರ.. ಅದಕ್ಕೆ ನಿಮ್ಮ ಮೇಲೆ ಕೋಪ.. ನಮ್ಮವರಿಗೂ ಹೇಳಿದ್ದೇನೆ.. ನಿಮ್ಮ ವಿಶೇಷ ದಿನಗಳಲ್ಲಿ ನಾವು ಯಾರೂ ನಿಮಗೆ ಫೋನ್ ಮಾಡೋಲ್ಲ ಮತ್ತು ವಿಶ್ ಮಾಡೋಲ್ಲ ಅಂತ ಮತ್ತು ಮಾಡಬಾರದು ಅಂತ.. ಇದೆ ನಿಮಗೆ ನಾ ಕೊಡುತ್ತಿರುವ ಶಿಕ್ಷೆ" 


ದಯಮಾಡಿ ಅನುಗ್ರಹ ತೋರಿಸಿ ಈ ನಿಮ್ಮ ಅಣ್ಣನ ಮೇಲೆ.. ಬಡವನ ಮೇಲೆ ಈ ಪರಿಯ ಕೋಪ ಬೇಡ ಅಕ್ಕಯ್ಯ.. ನಿಮಗೆ ಸಾಷ್ಟ್ರಾಂಗ ನಮಸ್ಕಾರ ಮಾಡುವೆ.. "

ಕೊಂಚ ಶಾಂತವಾದ ಪ್ರತಿ ಅಕ್ಕಯ್ಯ.. "ಇಲ್ಲ ಅಣ್ಣ ದಯಮಾಡಿ ಕಾಲಿಗೆ ನಮಸ್ಕರಿಸಬೇಡಿ ನೀವು ನನ್ನ ಮುದ್ದು ಅಣ್ಣ... ಹಾಗೆಲ್ಲ ಮಾಡಬಾರದು.. ಆದರೆ ಇದಕ್ಕೆ ಶಿಕ್ಷೆ ಕೊಡಲೇ ಬೇಕು.. ಎಲ್ಲಿ ನಿಮ್ಮ ನಾಲಿಗೆಯನ್ನು ತೆರೆಯಿರಿ.. ಅದರ ಮೇಲೆ ನನ್ನ ದೋಸೆ ಮಗಚುವ ಕೈಯಿಂದ ಬರೆಯಬೇಕು"

ಬೀಸುವ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಎನ್ನುವ ಹಾಗೆ ಕೊಂಚ ಶಾಂತಳಾದ ಅಕ್ಕಯನನ್ನು ಕಂಡು.. ಅಕ್ಕಯ್ಯ ಹೇಳಿದ ಹಾಗೆ ನಾಲಿಗೆಯನ್ನು ಚಾಚಿದನು ಶ್ರೀಕಾಂತ... 

ಅಕ್ಕಯ್ಯ ಸುಡು ಸುಡುತ್ತಿದ್ದ ಮಗಚುವ ಕೈಯನ್ನು ಟೊಮೇಟೊ ಸೂಪಲ್ಲಿ ಅದ್ದಿ ಅದ್ದಿ ಈ ಕೆಳಗಿನ ಸಾಲನ್ನು ಬರೆದರು... 
"ನನ್ನದು ತಪ್ಪಾಯಿತು.. ನನ್ನ ಎಲ್ಲಾ ಗೆಳೆಯರ ಬಳಗದ ಸದಸ್ಯರಿಗೂ ನನ್ನ ಅಕ್ಕ ತಂಗಿಯರಿಗೂ ಒಂದೇ ರೀತಿಯಲ್ಲಿ ನನ್ನ ಶೈಲಿಯಲ್ಲಿ ಶುಭಾಶಯಗಳನ್ನು ಕೋರುತ್ತೇನೆ.. ಎಷ್ಟೇ ಕೆಲಸದ ಒತ್ತಡವಿರಲಿ.. ಪರಿಸ್ಥಿತಿ ಏನೇ ಆಗಿರಲಿ ನಾ ಕಟ್ಟಿಕೊಂಡ ಈ ಕಾರ್ಯವನ್ನು ಬಿಡಲಾರೆನು.. .. ಇದಕ್ಕೆ ಆ ಕೀ ಬೋರ್ಡ್ ಸಾಕ್ಷಿ.. ಇದಕ್ಕೆ ತಪ್ಪಿದರೆ.. ಪ್ರತಿಯೊಬ್ಬರ ವಿಶೇಷ ದಿನಗಳಿಗೆ ಎರಡೆರಡು ಬಾರಿ ಶುಭಾಷಯ ಪತ್ರಗಳನ್ನು ಬರೆಯಬೇಕು.. ಇದೆ ನಾ ನಿಮಗೆ ಕೊಡುತ್ತಿರುವ ಶಿಕ್ಷೆ" ಎಂದು ಶಾಸನವನ್ನು ಬರೆದು ಬಿಟ್ಟರು ಅಕ್ಕಯ್ಯ.. 

"ಅಣ್ಣಾ ನಾ ಬರೆದಿದ್ದೇನೆ.. ಆ ನಾಲಿಗೆಯನ್ನು ಒಳಗೆ ಎಳೆದುಕೊಳ್ಳಿ.. ಬರೆದ ಅಕ್ಷರಗಳು ನಿಮ್ಮ ಹೃದಯದಲ್ಲಿ ಕೂತು ಬಿಡುತ್ತವೆ.. ಮತ್ತೆಂದು ಈ ರೀತಿಯ ತಪ್ಪು ಮಾಡದಿರಿ"

ಸಂತೃಪ್ತನಾದ ಶ್ರೀಕಾಂತ.. "ಅಕ್ಕಯ್ಯ ನಾನು ಯಾರನ್ನು ಮರೆತಿಲ್ಲ ಮರೆಯುವುದಿಲ್ಲ.. ಆದರೆ ನಿಮಗೆ ಬೇಸರ ತಂದ ವಿಚಾರ ನನಗೆ ಬೇಸರವಾಗಿದೆ... ಇನ್ನೆಂದು ಹೀಗೆ ಆಗುವುದಿಲ್ಲ.. ದಯಮಾಡಿ ಕ್ಷಮಿಸಿ.. ಮತ್ತೆ ನಿಮ್ಮ ಜನುಮದಿನಕ್ಕೆ ನನ್ನ ಶುಭಾಶಯಗಳನ್ನು ಒಪ್ಪಿಸಿಕೊಂಡು ಕೃತಾರ್ಥನನ್ನಾಗಿ ಮಾಡಿ.. "

"ಕ್ಷಮಿಸಿ ಆಗಿದೆ.. ಅಣ್ಣ.. ಈಗ ಮನಸ್ಸಿಗೆ ಸಮಾಧಾನವಾಯಿತು.. ನನ್ನ ಮುದ್ದು ಅಣ್ಣನಿಗೆ ಬಯ್ದದ್ದಕ್ಕೆ ನನ್ನನ್ನು ಕ್ಷಮಿಸಿ ಅಣ್ಣಯ್ಯ.. "

"ಹುಟ್ಟು ಹಬ್ಬದ ಶುಭಾಶಯಗಳು ಅಕ್ಕಯ್ಯ... "

(ನಾವು ಐವರು ಶಾಲಾ ದಿನಗಳಿಂದ ಸ್ನೇಹಿತರು.. ನಮ್ಮ ಜೀವನದ ಮೂವತ್ತು ವರ್ಷಗಳಿಗೂ ಹೆಚ್ಚು ಜೊತೆಯಲ್ಲಿ ಕಳೆದಿದ್ದೇವೆ.. ನಮ್ಮ ಜೀವನದಲ್ಲಿ ಬಂದ ನಮ್ಮ ಸಂಗಾತಿಗಳು ಕೂಡ ಈ ಸ್ನೇಹಕ್ಕೆ ತಂಪನ್ನು ಎರೆದು.. ಅವರವರ ಸಂಗಾತಿಗಳು ಮಿಕ್ಕವರಿಗೆ ಮುದ್ದು ಸಹೋದರಿಗಳಾಗಿದ್ದಾರೆ.. ಅಂಥಹ ಸಹೋದರಿಯರಲ್ಲಿ ಆಗ್ರ ಸ್ಥಾನದಲ್ಲಿ ಕುಳಿತಿರುವ ಪ್ರತಿಭಾ ಶಶಿಧರ್ ಅದೇನೂ ನನ್ನ ಮೇಲೆ ವಿಪರೀತ ಅಭಿಮಾನ.. ನಾನು ಇವರನ್ನು ಅಕ್ಕ ಎನ್ನುತ್ತೇನೆ ಇವರು ನನ್ನ ಅಣ್ಣ ಎನ್ನುತ್ತಾರೆ.. ನನ್ನ ಜೀವನದ ಏನೇ ಕಷ್ಟ ಸುಖಗಳನ್ನು ಇವರ ಜೊತೆಯಲ್ಲಿ ಹಂಚಿಕೊಂಡರೆ ನನಗೆ ಸಮಾಧಾನ.. ಕೆಲಸದ ಒತ್ತಡದಿಂದ ಇವರ ವಿವಾಹ ದಿನಕ್ಕೆ ಮತ್ತು ಕಳೆದ ವರ್ಷದ ಜನುಮದಿನಕ್ಕೆ ಶುಭಾಶಯಗಳನ್ನು ತಲುಪಿಸಿರಲಿಲ್ಲ ನನ್ನ ಶೈಲಿಯಲ್ಲಿ ಅದಕ್ಕೆ ಕೆಂಡಾಮಂಡಲವಾಗಿದ್ದರು.. ಆ ಕೋಪವನ್ನು ತಣಿಸಲು ನಾನು ಕಾಳಿದಾಸನಾಗಬೇಕಾಯಿತು.. ಆ ಮಾತೆಯ ಕೋಪವನ್ನು ತಣಿಸಲು ಈ ಲೇಖನ)

ಅಕ್ಕಯ್ಯ ಮತ್ತೊಮ್ಮೆ ಜನುಮದಿನದ ಶುಭಾಶಯಗಳು!!! 

Friday, April 4, 2014

ಸುನಿತಾ ಅನ್ನುವ ಪುಟ್ಟಿ!!!!

"ಮೇಡಂ"

ಒಂದು ದಪ್ಪವಾದ ದ್ವನಿ ಕರೆದಾಗ.. ಕೂದಲನ್ನು ಸರಿ ಮಾಡಿಕೊಳ್ಳುತ್ತಾ.. ಬೇಲೂರಿನ ಗೊಂಬೆಯ ಹಾಗೆ ಹಾಗೆ ೬೫ ಕೋನದಲ್ಲಿ ತಿರುಗಿದರು..

ಹುಬ್ಬುಗಳೇ ಮಾತಾಡಿದವು

"ಮೇಡಂ.. ಇವರು  ಶ್ರೀಕಾಂತ್ ಮಂಜುನಾಥ್ ಅಂತ ನಮ್ಮ ಟೀಂ ಗೆ ಹೊಸದಾಗಿ ಸೇರಿಕೊಂಡಿದ್ದಾರೆ"

ಕನಿಷ್ಠ ಫೋಟೋಗೆ ಕೊಡುವಷ್ಟು / ತೋರಿಸುವಷ್ಟು ಸಹ ಹಲ್ಲು ಕಾಣಲಿಲ್ಲ..

ಅಯ್ಯೋ ನಮ್ಮ ಬಣ್ಣಕ್ಕೆ ಯಾರೂ ತಾನೇ ಮಾತಾಡಿಸುತ್ತಾರೆ ಎಂದು ಅನ್ನಿಸುವಾಗಲೇ..

"ಹಾಯ್" ಎನ್ನುವ ಕೋಮಲ ಸ್ವರ ಬಂತು..

"ಹಾಯ್" ಎಂದು ಅಲ್ಲಿಂದ ಅಂತರ್ದಾನವಾದೇ...

ಹೀಗೆ ಕಳೆಯಿತು.. ೨೦೦೮ ರ ಮಾರ್ಚ್ ಮಾಸದಲ್ಲಿ.. ಹೀಗೆ ಚಾಟ್ ಮಾಡುತ್ತಾ.. ಒಂದು ವಿಷಯ ಹೇಳಲೇ ಎಂದೇ..

"ಹೇಳಿ" ಅಂದಿತು ಆ ಕಡೆಯ ಸ್ವರವಿಲ್ಲದ ಸ್ವರ..

"ನೀವು ಸೀದಾ ನನ್ನ ತಂಗಿಯ ಸ್ಥಾನ ತುಂಬುವುದಕ್ಕೆ ಸಮರ್ಥರಿದ್ದೀರ"

"Thank you Bro"

ಮನಸ್ಸಿಗೆ ಹಕ್ಕಿಯ ರೆಕ್ಕೆ ಬಂದಷ್ಟು ಖುಷಿ.. ಆ ಹೊತ್ತಿನ ತನಕ  ನನ್ನನ್ನು ಯಾರೂ Bro  ಅಂತ ಕೂಗಿರಲೂ ಇಲ್ಲ ಕರೆದಿರಲೂ ಇಲ್ಲಾ..

ಮುಂದಿನ ಮೂರು ವರ್ಷಗಳು ಕಚೇರಿ ಕೆಲಸ ಮಾಡುವಾಗಲೂ ನಮ್ಮ ಅಣ್ಣ ತಂಗಿ ಅನುಬಂಧ ಹಾಗೆಯೇ ಮುಂದುವರೆದಿತ್ತು.

ಸುನಿತಾ ಅನ್ನುವ ಹೆಸರಿಗಿಂತ "ಪುಟ್ಟಿ" ಎನ್ನುವ ಹೆಸರೇ ಇವಳಿಗೆ ಸರಿಯಾಗಿ ಹೊಂದುತ್ತದೆ..

ಇಷ್ಟವಾಗುವ ಮುಖಭಾವ.. ಧ್ವನಿ..ಕಣ್ಣುಗಳು.. ಇವಕ್ಕಿಂತ ಮಿಗಿಲಾಗಿ Bro ಎಂದು ಕರೆವಾಗ ಆ ಧ್ವನಿಯಲ್ಲಿನ ಮಧುರತೆ.. ಹೃದಯದಿಂದ ಕರೆಯುವ ಆ ಸ್ವರ ತುಂಬಾ ಇಷ್ಟವಾಗುತ್ತದೆ.

ನನ್ನ ಜೀವನದ ಮೊದಲ ಪುಟ್ಟಿ ಇವಳು. ಆರು ವರ್ಷಗಳ ಪರಿಚಯ.. ಇವಳು ಅರವತ್ತು ವರ್ಷಗಳಿಂದ ನನಗೆ ಪರಿಚಯ ಅನ್ನಿಸುವಷ್ಟು ಆತ್ಮೀಯಳಾಗಿಬಿಟ್ಟಿದ್ದಾಳೆ..

ಇಂದು ಪುಟ್ಟಿಯ ಜನುಮದಿನ.. ನಾನು ಪ್ರತಿ ಭಾರಿ ಪುಟ್ಟಿಯನ್ನು ನೆನೆದಾಗೆಲ್ಲ ಮೊದಲ ಭೇಟಿಯ ಮಧುರ ನೆನಪುಗಳು ಕಾಡುತ್ತವೆ.

ನಮ್ಮಿಬ್ಬರ ಜೀವನದಲ್ಲಿ ಬೇಕಾದಷ್ಟು ಬದಲಾವಣೆಗಳಾದರೂ ನಮ್ಮಿಬ್ಬರ ಅಣ್ಣ ತಂಗಿ ಅನುಬಂಧ.. ಸ್ವಲ್ಪವೂ ಮಾಸದ ಹಾಗೆ ಸಾಗಿ ಬಂದಿದೆ..

ಪುಟ್ಟಿ ನಿನ್ನ ಜನುಮದಿನಕ್ಕೆ ನಾ ಏನೇ ಉಡುಗೆ ಕೊಟ್ಟರೂ ಕಡಿಮೆಯೇ ಕಾರಣ ನನ್ನ ಜೀವನದ ಮೊದಲ ಪುಟ್ಟಿ ನೀನು.. ಇಂದಿಗೂ ನಾ ಆರು ವರ್ಷಗಳಲ್ಲಿ ನಡೆದ ಪ್ರತಿ ಘಟನೆಗಳು ಮಾತುಗಳು ನನಗೆ ಕಂಠ ಪಾಠ ವಾಗಿವೆ.. ಕಾರಣ ನೀನು ನನಗೆ ಭಗವಂತ ಕೊಟ್ಟ ಮುದ್ದು ಮನಸ್ಸಿನ ಪುಟ್ಟಿ..

ನಿನ್ನ ಜೀವನದ ಎಲ್ಲಾ ಕನಸುಗಳು ನನಸಾಗಲಿ.. ಸುಂದರ ಬದುಕಿನಲ್ಲಿ ಮಧುರ ಭಾವ ತುಂಬಿದ ಹೆಜ್ಜೆಗಳು ಸದಾ ಮಲ್ಲಿಗೆಯ ಕಂಪಿನ ಹಾದಿಯಲ್ಲಿ ಸಾಗುತ್ತಿರಲಿ..

ತುಂಬಾ ಇಷ್ಟವಾದ ಪುಟ್ಟಿ ಹಾಗು ಚಿತ್ರ!!! ಚಿತ್ರ ಕೃಪೆ - ಪುಟ್ಟಿ 

ಹುಟ್ಟು ಹಬ್ಬದ ಶುಭಾಶಯಗಳು...... ಪುಟ್ಟಿ.. ನನ್ನ ಹೃದಯದಿಂದ!!!

Tuesday, July 9, 2013

ಒಂದು ತಂತಿ ಪರ್ಸಂಗ …. !

ಈ ಅಂಕಣಕ್ಕೆ ಏನೂ ಬರೆಯದೆ ಎರಡು ವರ್ಷಗಳೇ ಕಳೆದಿದ್ದವು..

ಒಂದು ಸುಂದರ ತಂಡ, ಹುಮ್ಮಸ್ಸಿನ ಮನಸುಳ್ಳ ತಂಡವನ್ನು ನೋಡಿದ್ದ ನೆನಪು ಬಹಳ ಕಡಿಮೆ ಇತ್ತು.

ಕಳೆದ ಕೆಲವು ತಿಂಗಳುಗಳ ಹಿಂದೆ ಭೇಟಿ ಮಾಡಿದ ರೂಪ ಸತೀಶ್ ಅವರ "3K" ತಂಡ, ಸತೀಶ್ ಬಿ ಕನ್ನಡಿಗ ಅವರ "ಹತ್ತು ಜನರಿಂದ ಒಂದೊಂದು ತುತ್ತು" ಎನ್ನುವ ತಂಡ, ಮಹೇಶ್ ಮತ್ತು ಸ್ನೇಹಿತರ ಅವರ "ಸ್ನೇಹಲೋಕ", ಅಶೋಕ್ ಶೆಟ್ಟಿ ಮತ್ತು ಸ್ನೇಹಿತರ "ನುಡಿಮುತ್ತು" ತಂಡ, ಪ್ರಕಾಶ ಹೆಗಡೆ ಅವರ "ಬಜ್ಜಿಗರು" ಈ ತಂಡಗಳಲ್ಲಿ ಅಸಾಧ್ಯ ಮನಸ್ಸಿನ ಸಾಧಕರೇ  ತುಂಬಿದ್ದಾರೆ.

ಇಂತಹ ಇನ್ನೊಂದು ಗುಂಪು "ಪಂಜು" ಎಲ್ಲಾದರು ಇರು ಎಂತಾದರು ಇರು ಎಂದಿದಿಗೂ ನೀ ಕನ್ನಡವಾಗಿರು ಎನ್ನುವ ಕುವೆಂಪು ಕವಿವಾಣಿಯಂತೆ  ನಟರಾಜು ಅವರ ಪರಿಶ್ರಮದ "ಪಂಜು"  ಕವಿಗಳನ್ನು, ಲೇಖಕರನ್ನು, ಕಥೆಗಾರರನ್ನು ಹುರಿದುಂಬಿಸುತ್ತಾ ಕನ್ನಡ ತಾಯಿಯ ಸೇವೆ ಮಾಡುತ್ತಿರುವುದು ತುಂಬಾ ಹಿತಕರ ವಿಷಯ.

http://www.panjumagazine.com/?p=3088

ಬೆಳ್ಳಿ ಹಬ್ಬದ ಸಂಚಿಕೆಯ ಸಂಭ್ರಮದಲ್ಲಿ ಪಂಜು ಪತ್ರಿಕೆ ತೇಲುತ್ತಿರುವ ಈ ಸಂದರ್ಭದಲ್ಲಿ  ಸಹೋದರ ನಟರಾಜು ಅವರಿಗೆ ಶುಭಾಶಯಗಳನ್ನು ಸಲ್ಲಿಸುತ್ತಾ.. ಇಡಿ ತಂಡಕ್ಕೆ ಅಭಿನಂದನೆಗಳನ್ನು ಹೇಳುತ್ತಾ.. ನನ್ನ ಕಿರು ಒಂದು ತಂತಿ! ಎಂಬ                                                    ಲೇಖನವನ್ನು ಈ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪ್ರಕಟಿಸಿದ ಮಹನೀಯರಿಗೆ ಧನ್ಯವಾದಗಳನ್ನು ಹೇಳ ಬಯಸುತ್ತೇನೆ. ಜೊತೆಯಲ್ಲಿ ಸುಮಾರು ಎರಡು ವಸಂತಗಳಿಂದ ಅಜ್ಞಾತವಾಗಿದ್ದ ಈ ಅಂಕಣವನ್ನು ದಂಡೆಗೆ ಮರಳಿ ಬರುತ್ತಿದೆ ಎಂದಿನಂತೆ ಓದಿ,  ಆನಂದಿಸಿ.. ಹರಸಿ!

******************************

ಐದು ಮಂದಿ ಹಳ್ಳಿಕಟ್ಟೆಯಲ್ಲಿ ಬೀಡಿ ಸೇದುತ್ತಾ ಲೋಕಾಭಿರಾಮವಾಗಿ ಮಾತಾಡುತ್ತ ಕುಳಿತಿದ್ದರು…

"ನೀನು ಏನೇ ಹೇಳು.. ಈ ಪರ್ಪಂಚದಲ್ಲಿ ಏಟೊಂದು ಬದಲಾವಣೆ ಆಗಿ ಬಿಡ್ತು!"

"ಹೌದು ಕಣಣ್ಣ..  ಮೊದ್ಲು ಮೊದ್ಲು ಒಬ್ಬರನ್ನ ಒಬ್ಬರು ಭೇಟಿ ಮಾಡೋಕೆ ಆನಾಡಿ ಕಷ್ಟ ಪಡ್ತಾ ಇದ್ವಿ.. ಈಗ ಎಲ್ಲಾ ಚಿಟಿಕೆ ಚಿಟಿಕೆ ಹೊಡೆಯೋದರಲ್ಲಿ ಮುಗಿಯುತ್ತೆ"

"ಗುರುವೇ ನಿನಗೆ ಗೊತ್ತಾ… ಈ ಟೆಲಿಗ್ರಾಂ ಅಂದ್ರೆ ತಂತಿ ಸೇವೆ ಐತಲ್ಲ ಅದನ್ನ ನಿಲ್ಲಿಸಿ ಬಿಡ್ತಾರಂತೆ.. ಈ ತಂತಿ ಸೇವೆ ಬಗ್ಗೆ ನಿನ್ನ ಅನುಭವ ಹೇಳ್ರಣ್ಣಾ!"


"ಓಹ್ ಹೌದಾ.. ಅದರ ಬಗ್ಗೆ ಪಸಂದಾಗಿ ನಡೆದ ಒಂದು ಅನುಭವ ಐತೆ … ನಮ್ಮ ಸ್ನೇಹಿತ ರಾಮನಗರದ ವೆಂಕಿ ಗೊತ್ತಲ್ಲ .. ಅವನಿಗೆ ಹುಟ್ಟು ಹಬ್ಬಕ್ಕೆ ಒಂದು ಸುಬಾಸಯ ಹೇಳೋಣ  ಅನ್ಕಂಡಿದ್ವಿ.. "

"ಹಾ … ಮುಂದಾ!"

"ಆವಾಗ ನಾವೆಲ್ಲಾ ಓದುತಿದ್ದಾ ಕಾಲ.. ಜೇಬು ತೂತು.. ಪ್ರತಿ ಕರ್ಚಿಗೂ ಮನೆಯಲ್ಲಿ ಕೇಳಬೇಕಾದ ಕಾಲ.. ಏನೋ ಹುಚ್ಚು ಮನ್ಸು.. ವೆಂಕಿಗೆ ಶುಭಾಷಯ ಹೇಳೋಕೆ ತಂತಿ ಕಳಿಸೇ ಬಿಡೋಣ ಅಂತ ಅಂಚೆ ಕಚೇರಿಗೆ ಹೋದ್ವಿ… "

"ಹಾ ಆಮ್ಯಾಕೆ"

"ಅಲ್ಲಿದ್ದ ಒಂದು ವಮ್ಮನ ಕೇಳಿದ್ವಿ.. ಆಕೆ ಒಂದು ಪಾರಂ ಕೊಟ್ಳು.. ತುಂಬಿ ಕೊಡಿ ಅಂಥಾ"

"ಹಾ"

"ನಾವು ಮಹಾಭಾರತ ಬರೆದಂಗೆ ನಮ್ಮ ತಲೇಲಿದ್ದದನೆಲ್ಲ ಆ ಪಾರಂನಲ್ಲಿ  ತುಂಬಿ.. ನಮ್ಮ ಸುಬಾಸಯ ಸಂದೇಸ ಬರ್ದು ಕೊಟ್ವಿ… ಎಟಾಯ್ತದೆ ನೋಡವ್ವಾ ಅಂತ ಕೇಳಿದ್ವು … ಆ ವಮ್ಮ ಅದನ್ನ ದಿನಪತ್ರಿಕೆ ಓದ್ದಂಗೆ ಓದ್ತಾ.. ಇದಕ್ಕೆ ೯೫ ರುಪಾಯ್ ಆಯ್ತದೆ ಅಂದ್ಲು… ನಾವೆಲ್ಲಾ ಚಡ್ಡಿ ಜೇಬಿಂದ ಹಿಡಿದು.. ನಮ್ಮ ಚೀಲ ಎಲ್ಲ ತಡಕಾಡಿದಾಗ ಸಿಕ್ಕದ್ದು ೮೦ ರುಪ್ಪಾಯಿ…

"ಆಮ್ಯಾಕೆ… "

"ಮ್ಯಾಡಂ… ನಮ್ತಾವ ಬರಿ ೮೦ ರುಪಾಯಿ ಮಾತ್ರವ ಇರೋದು.. ಏನ್ ಮಾಡೋದು ಅಂದದಕ್ಕೆ ಆ ವಮ್ಮ .. ನಿಮ್ಮ ಸುಬಾಸಯ ಸಂದೇಸ ವಸಿ ತುಂಡು ಮಾಡಿ.. ಪ್ರತಿ ಪದಕ್ಕೆ ಇಷ್ಟು ದುಡ್ದಾಯ್ತದೆ ಅಂತು.. "

"ಹೂಂ…"

"ಸರಿ ಇನ್ನೇನ್ ಮಾಡೋದು.. ಹಂಗೆ ಮಾಡಿ ನಾವು ಹೇಳಬೇಕಾದ್ದು ಬರಿ ಸುಬಾಸಯ ತಾನೇ.. ಹುಟ್ಟು ಹಬ್ಬಕ್ಕೆ ಸುಬಾಸಯ ಅಂತ ಅದನ್ನ ತಿದ್ದಿ.. ಕೊಟ್ವಿ.. ನಮ್ಮತ್ರ ಇದ್ದಾ ದುಡ್ಡು ಸರಿ ಹೋಯ್ತು.. "

"ಮುಂದಿದ್ದು ನಂಗೊತ್ತು" ಅಂದ ಇನ್ನೊಬ್ಬ ಸೇದುತಿದ್ದ ಬೀಡಿಯ ಕೊನೆ ದಂ ಎಳೆದು!

"ಹೊಟ್ಟೆ ಹಸಿತಾ ಇತ್ತು.. ಇದ್ದ ಬದ್ದ ದುಡ್ಡೆಲ್ಲ ತಂತಿಗೆ ಸುರಿದು.. ತಂತಿ ಕಳಿಸಿ ..... ಖಾಲಿ ಹೊಟ್ಟೆ ಹಿಡಿದುಕೊಂಡು ಮನೆಗೆ ಹೋದ್ವಿ.. "


"ಮನೆಗೆ ಹೋದ್ರೆ.. ಈ ಬಡ್ಡಿ ಹೈದ ವೆಂಕಿ ಮನೆ ತಾವ ಕಾಯ್ತಾ ಅವ್ನೆ!"

"ನಮಗೆಲ್ಲ ಒಂದು ಕಡೆ ಕುಸಿ.. ಇನ್ನೊಂದು ಕಡೆ ಅನ್ಯಾಯವಾಗಿ ತಂತಿ ಕಳ್ಸಿ ಇದ್ದ ಬದ್ದ ದುಡ್ಡೆಲ್ಲ ಖಾಲಿ ಮಾಡಿಕೊಂಡು ಬಂದ್ರೆ … ಈ ಮಗ ಬೆಂಗಳೂರಿಗೆ ಬಂದವ್ನೆ ಅಂತ ಕೋಪ"

"ಏನೋ ಮಾಡೋದು.. ಆ ವಸಿ ಕೋಪ…  ವಸಿ ಕುಸಿಯಲ್ಲಿ ಮಾತಾಡ್ತಾ ಕುಂತ್ವಿ.. ಮತ್ತೆ ಕುಸಿ ಕುಸಿಯಾಗಿ ಮತ್ತೊಮ್ಮೆ ಸುಬಾಸಯ ಕೋರುತ್ತಾ.. ಮನೆಯಲ್ಲಿ ಅಮ್ಮ ಮಾಡಿದ್ದ ಪೊಗದಸ್ತಾದ ಅಡಿಗೆಯನ್ನ ಚಪ್ಪರಿಸಿಕೊಂದು ತಿಂದ್ವಿ"

"ಏನೇ ಆಗಲಿ.. ನಮ್ಮ ಗೆಳೆತನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಾವು ಮೊದಲು ಹಾಗು ಕಡೆ ಬಾರಿ ಕಳಿಸಿದ ತಂತಿ ಅವಾಂತರವನ್ನು ಇವತ್ತು ನೆಪ್ಪು ಮಾಡ್ಕಂಡು ನಗ್ತಾ ಇರ್ತೀವಿ.. ಅಂತ ತಂತಿ ಸೇವೆ ಇನ್ನೊಂದು ಹದಿನೈದು ಇಪ್ಪತ್ತು ದಿನದಲ್ಲಿ ನಿಂತು ಹೋಗುತ್ತೆ ಅಂದ್ರೆ ಬೇಸರವಾಯ್ತದೆ.. ಆಗಲಿ ಜಗತ್ತಲ್ಲಿ ಯಾವ್ದು ತಾನೇ ಸಾಸ್ವಾತ ಅಲ್ವ"


************************* 

ಅರೆ ಅಣ್ಣಾ ನಿನಗೆ ಗೊತ್ತಾ.. ನಮ್ಮ ಗೆಳೆತನ ಬೆಳೆದು ನಿಂತು ಇಪ್ಪತೈದು ವರ್ಸ ಆಯಿತು ಹಾಗೆಯೇ ನಮ್ಮ ನಟರಾಜಣ್ಣ ಮತ್ತು ತಂಡದ "ಪಂಜು" ಇ-ಪತ್ರಿಕೆ ಕೂಡ ಸುರುವಾಗಿ ಇಪ್ಪತ್ತೈದು ವಾರಗಳು ಆಯಿತು… ಎಂತಹ ಸಂತಸ ಸಮಾಚಾರ ಅಲ್ವ…"

"ಬನ್ರಣ್ಣ ನಾವೆಲ್ಲಾ ಸೇರಿ ಕನ್ನಡ ತಾಯಿಯ ಸೇವೆ ಮಾಡುತ್ತಾ ಕನ್ನಡದ ಕಂಪನ್ನು ಜಗತ್ತಿನೆಲ್ಲೆಡೆ ಬೆಳಗುಸುತ್ತಿರುವ "ಪಂಜು" ತಂಡಕ್ಕೆ ಸುಬಾಸಯ ಕೋರುತ್ತ ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ"

"ಪ್ರೀತಿಯ ನಟಣ್ಣ.. ನಿಮ್ಮ ಅಭಿಮಾನದ ಪಂಜು ಸದಾ ಬೆಳಗುತ್ತಲಿರಲಿ ಹಾಗೆಯೇ ಇದರ ಪ್ರಕಾಸದಲ್ಲಿ ಅನೇಕ ಲೇಖಕರು, ಕವಿಗಳು ಬೆಳಗಲಿ ಕೀರ್ತಿಸಾಲಿಗಳಾಗಲಿ.. ಮತ್ತೊಮ್ಮೆ ಇಪ್ಪತ್ತೈದು ವಾರಗಳ ಸವಿ ನೆನಪಲ್ಲಿ ಪಂಜು ತಂಡಕ್ಕೆ ಅಭಿನಂದನೆಗಳು"

Saturday, April 23, 2011

Marriage Anniversary - Chaya-Prakash


Shiva:  Parvathi, today I will be late for dinner, don’t wait for me

Parvathi:  Why My lord, are you going out of station from Kailasa, anything urgent

Shiva: Yes, My dear, Am going to my house near white house.

Parvathi: ooh, you are going to USA is it, I too haven’t seen, would like to come with you, will you permit me.

Shiva: No dear, this is a blessed house near RT Nagar, where in blessed couples - living in the shadow (Chaya) of supreme lord of wealth (Sirish) and lightening light (Prakash).  Today is the day of coming together in each other lives. Would be going to bless them on this momentous occasion of their life. 

Paravathi: My lord, See Ganapa, and Subbu already with their vehicles on, call Nandi, we all go there to bless the best couples on the earth

Will wish them, happiness, progress, healthy wealth to the family, wish you a wonderful day and year ahead.

Tuesday, March 22, 2011

Advance Birthday wishes to Gurudutt - 19th March 2011


The Sanskrit Shloka says

"Guru is brahma – Guru is the creator"
"Guru is Vishnu – Guru is the disciples god"
"Guru is maheshwara – Guru is the care taker"
  
The combination of all the three, is Guru Dutta. 

On the day of your day, let the creativity, Disciples, and the caretaking be follows you all the time.

Wish you the the happiness, joy, and the growth be with you all the time.

Wish you a advanced happy birthday wishes

Friday, March 18, 2011

Guru Brahma, Guru Vishnu, Guru devo Maheshwara - 19th March 2011


The Sanskrit Shloka says

"Guru is brahma – Guru is the creator"
"Guru is Vishnu – Guru is the disciples god"
"Guru is maheshwara – Guru is the care taker"
  
The combination of all the three, is Guru Dutta. 

On the day of your day, let the creativity, Disciples, and the caretaking be follows you all the time.

Wish you the the happiness, joy, and the growth be with you all the time.

Wish you a advanced happy birthday wishes
 
 

Thursday, March 10, 2011

Team of Angels in Cisco

My nature of work is like honey-bee…taking fragrance, and honey from each and every flower….all the people who listed below, and all of them, who are not in the list, helped me to build a nest of honey… so showing my gratitude in this way

Anand Nagaraj
Title : Sri's Supremo
Reason : Supremo will be the one, who will tackle anything from everything

Anand Reddy
Title   : Sri's-Ullasanga Utsahanga
Reason : Lively is the one word, which sparkles the energy level

Mallik
Title : Sri's-Matadeesharu
Reason : Matadeesharu always silent filled patience, that will elevate their happiness

Ragesh
Title  : Sri's-Prabhandhak
Reason : Prabhandhak is one who manages the show

Ramkumar
Title : Sri's-Sprinkler
Reason : Sprinkler spills the water all round to grow along with the growth

Rangaswamy
Title   : Sri's-Super Natural
Reason : Super itself is high, if is naturally super then it will be higher high

Santosh Peter
Title   : Sri's-Star
Reason : Star always twinkles with lesser light, but only people will know its importance

Shankar
Title : Sri's-Sri
Reason : He is the starter for anything….Sri is the Starting of everything and anything with
Out him Sri will end.

Suresh B
Title : Sri's-Stylo Stylo
Reason : Style is the one which cuts above the rest

Tirumala Naidu Kampalli
Title : Sri's-Leadingship
Reason : Ship and leading are the two things which gets success in life.

Umapathi
Title : Sri's-Twinkle Star
Reason : Twinkling, and showing their presence, that is what life is all about

Tuesday, March 8, 2011

A Day to remember - Birthday 2nd March 2011

There was a meeting to attended at 14.30 on that eventful day.  Suddenly, Joseph,  stud up from his seat, and said, let us go for a meeting.

I was wondering, what happened, I thought, may be he had blocked a room.  I followed him, along with Chay, and Guru, surprising was waiting in the form of birthday bash. A beautiful cake was waiting for me to put knifing on the cake.

As against the practice, instead of blowing away the candle, as per my practice, i lighted the candles, and kept away from the cake.

My guys demanded a song from me, but i promised that, i can write stories on the key board, but not from my tongue.  So this blog is dedicated to my team, who inspired me to go on high on my words.

The snap shots at the event provided a bigger enjoyment among ourselves.


My isnpirational friend, Sreedevi,  from one of the best alias i had ever been interacted blr-masala, presented a wonderful, master's piece "Lord Ganesh".  What is the best way to bid adieu to the organisation, which provided best moments, best friends, wonderful colleagues. A big Salute to Cisco.

Surprise was waiting for me in my house.  My best friend - Sheethal - My daughter handed out a nice write up for my birthday.....even though it was a complaint rather than compliment, but still i was dumb stuck at her writing spirits, which gave me a feeling that, my writing legacy will be continued by her.

A Big thanks to everyone, the wishes, the compliments, which has the potential to put me on a high pedestal, for making my D-Day a G-Day (Great Day)


https://picasaweb.google.com/srmanjun/ADayToRememberBirthday2ndMarch2011#

Sunday, March 6, 2011

The get to gather - 4th March 2011

The identification recognition happens all the time.  

The Sun, The Moon, The Stars always twinkles in the sky all the time. 

The Stars power will twinkle and outshines the Sun and the Moon, when they will get to hear the loud applause, by making a sound when two of our hands strikes together to make an energy yielding sound.  
The Announcing the world - What we are in to!!!!!!!!!!!!!

One such event was turning to unfold on the 4th Day of March 2011.  What  a day it was!!!!!!!!!!!!!!
The Man - The Moment - Joseph
Master craftsman, our manager Joseph, inspired of our honeybees, who constantly on their toes to make sure the team of invincible's on the path of less stress, by master planing an recognition program of their gallant efforts.  The competition was stiff, tough, but everyone was on a high on their own respects.  
Team awaiting to unfold the glaring moments.
The all team members, did identified some best talents, and rewarded as per their wishes.  Everyone had their share of moments of high.
The team awaiting to witness the moments of high!!!!!!!!!!!

Joseph started in usual impeccable style, the agenda of the all hands meeting.
Am telling you, this is the best of our team of network - Joseph

The roar, the applause, the spirits of happiness were high, as our trusted lieutenants being awarded with the awards, mementos.
It is so simple to be simple - Joseph


One small frame to accommodate the big Team!!!!!!
Some of the images will capture those freezing moments, and also mark the finale to my career in Cisco with the team of invincible's. It was an experience, where my words will feel to fail to express, as it leaving such a team of maestro's will make anyone's heart more heavy than the usual weight.  
Weight of emotions!!!!!!!
Just my eyes, and heart gave way to few invisible tears down the cheek.  These three years will be an golden chapter, which i want to unwind to visit the moments of life all the time.

It is a great get-to-gather the moments of happiness all round us.

The rest of the glaring moments are linked in the following..have a wonderful time..wish you all the best!!!!!!!!



This is not the end, but the beginning of an great team of invincibles.

Wednesday, February 23, 2011

Anand Reddy - Anando brahma - 4th Feb 2011


The ever agile Anand who is fondly called by Pinku as Chikka Anand, was on cloud nine on this day.

“Anando Brahma Govindoo Haar (ఆనందో బ్రహ్మ గోవిన్డూ హార)
Nee pere Ananda naaa pere snehamu” (నీ పేరే ఆనంద నా పేరే స్నేహము)


To be happy in the life…we should stay with Happiness

Anand…..Puttina Roju shubakanksalu!!!!!!!!!!!!!!!!!!!!!!!!!!!!

Wish you a wonderful Anand filled day